ಆಪತ್ಬಾಂಧವ ಚಾರಿಟಬಲ್ ಟ್ರಸ್ಟ್


ಕಾರ್ಯಕ್ಷೇತ್ರ ಹಾಗೂ ಕಾರ್ಯಾಲಯ :-

ಈ ಟ್ರಸ್ಟ್ ನ ಕಾರ್ಯ ಕ್ಷೇತ್ರವು ವಿಶಾಲವಾಗಿದ್ದು, ಇದರ ಕಾರ್ಯಾಲಯದ ನಂಬರ್ 6, 3ನೇ ಮುಖ್ಯ ರಸ್ತೆ, 8ನೇ ಅಡ್ಡರಸ್ತೆ, ಕೆನರಾ ಬ್ಯಾಂಕ್ ಕಾಲೋನಿ, ಚಂದ್ರ ಲೇಔಟ್, ವಿಜಯನಗರ, ಬೆಂಗಳೂರು - 560 040.

  • ಸಂಸ್ಥೆಯ ವತಿಯಿಂದ ಕಾಲಕಾಲಕ್ಕೆ ವೈದ್ಯಕೀಯ ಶಿಬಿರಗಳನ್ನು ನಡೆಸುವುದು ಹಾಗೂ ಉಚಿತ ಸಲಹೆ ಮತ್ತು ಔಷಧೋಪಚಾರಗಳನ್ನು ಒದಗಿಸುವುದು ಜೊತೆಗೆ ಬಡ ರೋಗಿಗಳಿಗೆ ಸಹಾಯ ಹಸ್ತ ಚಾಚುವುದು.
  • ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನ ಹಾಗೂ ಅಭಿನಂದನಾ ಪ್ರಶಸ್ತಿ ಪತ್ರಗಳನ್ನು ನೀಡುವುದು. ಜೊತೆಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುವುದು.
  • ಸಮಾಜದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರನ್ನು ಸನ್ಮಾನಿಸುವುದು.
  • ಬಡ ಮಕ್ಕಳ ಕಲ್ಯಾಣ ಅಭಿವೃದ್ಧಿಗಾಗಿ ಶಾಲಾ ಕಾಲೇಜು ಸ್ಥಾಪನೆ, ವೃತ್ತಿ ಶಿಕ್ಷಣ ತರಬೇತಿ, ತಾಂತ್ರಿಕ ವಿದ್ಯಾ ಸಂಸ್ಥೆಗಳು ಹಾಗೂ ಮತ್ತು ಮಹಿಳೆಯರ ಅಭಿವೃದ್ಧಿಗೆ ತರಬೇತಿ ಕೇಂದ್ರ, ಶಿಶು ಕಲ್ಯಾಣ ಕೇಂದ್ರ, ಬಾಲ ಕಾರ್ಮಿಕರ ಶಾಲೆ, ವೃದ್ರಾಶ್ರಮ, ಅನಾಥಾಶ್ರಮ ಮತ್ತು ಅನ್ನ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುವುದು.
  • ಸಂಸ್ಥೆಯ ವತಿಯಿಂದ ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪ್ರೋತ್ಸಾಹಿಸಿ ಪ್ರತಿಭೆ ಪುರಸ್ಕಾರ ನೀಡುವುದು.

ಕನ್ನಡವೇ ಸತ್ಯ...
ಕನ್ನಡವೇ ನಿತ್ಯ...

ಸಿರಿಗನ್ನಡಂ ಗೆಲ್ಗೆ...
ಸಿರಿಗನ್ನಡಂ ಬಾಳ್ಗೆ...

ತನು ಕನ್ನಡ...
ಮನ ಕನ್ನಡ...